ತೊಟ್ಟು-೮೧
- ಆಲೋಚನೆ
- Dec 8, 2021
- 1 min read
ನಡೆಯುತ್ತಿದ್ದವು
ಮಾನ-ಸನ್ಮಾನ
ಭವ್ಯ ಮೆರವಣಿಗೆ
ಹಿಂದೆ,
ಶೂರ-ಸಾಹಸಿಗಳು
ಪರಾಕ್ರಮ
ತೋರಿ ಬಂದಾಗ
ಅಗಸಿ ಬಾಗಿಲುಗಳಿಂದ;
ನಡೆಯುತ್ತಿವೆ
ಅವೇ ಇಂದು,
ಕಳ್ಳ-ಸುಳ್ಳ-ಭ್ರಷ್ಟ-ದುಷ್ಟ
ಅತ್ಯಾಚಾರಿಗಳಿಗೆ,
ಜಾಮೀನು
ಸಿಕ್ಕ ಕ್ಷಣವೆ
ಜೈಲುಗಳ
ಪ್ರವೇಶ
ದ್ವಾರಗಳಿಂದ!!
ಡಾ. ಬಸವರಾಜ ಸಾದರ.
Comments