top of page

ತೊಟ್ಟು-೮೧

ನಡೆಯುತ್ತಿದ್ದವು

ಮಾನ-ಸನ್ಮಾನ

ಭವ್ಯ ಮೆರವಣಿಗೆ

ಹಿಂದೆ,

ಶೂರ-ಸಾಹಸಿಗಳು

ಪರಾಕ್ರಮ

ತೋರಿ ಬಂದಾಗ

ಅಗಸಿ ಬಾಗಿಲುಗಳಿಂದ;

ನಡೆಯುತ್ತಿವೆ

ಅವೇ ಇಂದು,

ಕಳ್ಳ-ಸುಳ್ಳ-ಭ್ರಷ್ಟ-ದುಷ್ಟ

ಅತ್ಯಾಚಾರಿಗಳಿಗೆ,

ಜಾಮೀನು

ಸಿಕ್ಕ ಕ್ಷಣವೆ

ಜೈಲುಗಳ

ಪ್ರವೇಶ

ದ್ವಾರಗಳಿಂದ!!


ಡಾ. ಬಸವರಾಜ ಸಾದರ.

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page