top of page

ತೊಟ್ಟು-೮೧

ನಡೆಯುತ್ತಿದ್ದವು

ಮಾನ-ಸನ್ಮಾನ

ಭವ್ಯ ಮೆರವಣಿಗೆ

ಹಿಂದೆ,

ಶೂರ-ಸಾಹಸಿಗಳು

ಪರಾಕ್ರಮ

ತೋರಿ ಬಂದಾಗ

ಅಗಸಿ ಬಾಗಿಲುಗಳಿಂದ;

ನಡೆಯುತ್ತಿವೆ

ಅವೇ ಇಂದು,

ಕಳ್ಳ-ಸುಳ್ಳ-ಭ್ರಷ್ಟ-ದುಷ್ಟ

ಅತ್ಯಾಚಾರಿಗಳಿಗೆ,

ಜಾಮೀನು

ಸಿಕ್ಕ ಕ್ಷಣವೆ

ಜೈಲುಗಳ

ಪ್ರವೇಶ

ದ್ವಾರಗಳಿಂದ!!


ಡಾ. ಬಸವರಾಜ ಸಾದರ.

4 views0 comments
bottom of page