top of page

ತೊಟ್ಟು-೨೨೦

ಅಜ್ಜನ ಅಲವತ್ತು.

---------------------

'ಬಿತ್ತಿದರೆ

ಬಿತ್ತುವುದು

ಮುಕ್ಕು ಚಿಕ್ಕೆಯ

ಕಾಳು'- ಅಂದ್ರು

ಅನುಭಾವಿ ಅಜ್ಜ

ಬೇಂದ್ರೆ;

ವಿಷಾಂತರಿ

ಬೀಜ ಬಿತ್ತಿ,

ಶನಿಸಂತಾನದ

ನಾಟಿಯೂರಿ,

ಸರ್ವನಾಶದ ಬೆಳೆ

ಬೆಳೆಯುತ್ತಿದ್ದಾರೆ,

ನವಾಸುರರು,

ಮರೆತು

ಮನುಷ್ಯತ್ವ

ಎಂದರೇನು?

ಅಂದ್ರೆ.


ಡಾ. ಬಸವರಾಜ ಸಾದರ

 
 
 

Comments


©Alochane.com 

bottom of page