ತೊಟ್ಟು-೨೦೨
- ಆಲೋಚನೆ
- Mar 29, 2022
- 1 min read
ಘೋರತಪಸ್ಸು
-------------------
ಹತ್ತಾರು ವರ್ಷ
ಹಿಯಾಲಯದಲ್ಲಿ
ಘೋರ ತಪಗೈದ
ನಿಃಕಾಮಾನಂದರು
ಊರಿಗೆ ಬಂದರು;
ಬಗಲ ಕೂಸಿನ
ಯೋಗಿನಿಯೊಬ್ಬರು
ಅವರ ಜೊತೆ ಇದ್ದರು;
ಮುಗುಳು ನಕ್ಕ
ಸಂಸಾರಯೋಗಿಗಳು,
ನಮ್ಮೂರಲ್ಲೆ
ಇಂಥ ತಪಸ್ಸು
ಚಂದಾಗಿಯೆ
ಮಾಡಬಹುದಿತ್ತಲ್ಲ
ಎಂದರು!
ಡಾ. ಬಸವರಾಜ ಸಾದರ
Comentarios