top of page

ಗೋಪುರ

ಪ್ರೀಯ ಗೋಪು

ತಬ್ಲಾದ ಮೇಲೆ ಸೋಕಿದರೂ ಸಾಕು ಕೈ

ಜುಮ್ಮೆನ್ನುವುದು ಕೇಳುಗರ ಮೈ

ಕಲ್ಭಾಗದ ಹಳ್ಳ ಕಚ್ಚರ್ಕಿಗಳೆಲ್ಲ ತುಂಬಿ

ನಾದದ ಹೊಳೆ ಹರಿದು ದೊಡ್ಡ ನೆಗಸು

ಕಡಲಾಚೆಗು ನಾದದ ತೆರೆಗಳ ಅಬ್ಬರ

ಉಬ್ಬರ ಸಂಗೀತ ಲೋಕದ ಗೋಪುರ

ದಾ ದಿನ್ನಾ ದಾ ದಾದಾ ದಿನ್ನಾ ತಾಂ ತಿರಿಕಿಟ ತಾ

ನಿನ್ನಿನ ನೆನಪುಗಳ ನಾಳಿನ ಕನಸುಗಳ ತಾ

ಕೊರಳ ದನಿಗೆ ಬೆರಳ ಮಿಡಿತ ಗೋಪು

ಎದೆಯ ತುಡಿತಕೆ ಸಮ್ಮೋಹಕ ಬಡಿತ

ಎಲ್ಲರಂತಲ್ಲ ಹೊಸ ಹೊಸತು ನಿನ್ನದೆ ಛಾಪು

ವೇದನೆ ಸಂವೇದನೆಗೆ ಕಾವು ಕೊಡುವ ಕವಿತೆ

ಮನದೊಳಗಿನ ಮಾತಿಗೆ ತಬ್ಲಾ ಸಾಥ್

ಚಾಂದನಿ ಚಾಂದಸೆ ಹೋತಾ ಹೈ

ಬೆಳೆಯುವವನಿಗೆ ಬಾನೆ ಗಡಿ (ಇಲ್ಲ ಗಡಿಬಿಡಿ)

ಕಲ್ಲು ಕರಗುವ ಸಮಯದಲ್ಲಿ

ಕಲ್ಭಾಗದ ಗೋವಿಂದ ಹೆಗ್ಡೇರ ಮನೆಯಲ್ಲಿ

ಹರಿಯುತಿದೆ ನಾದದ ನದಿ

ಅತ್ತರು ಹಚ್ಚಿದಂತೆ ನಿಮ್ಮ ನಾದದ ಗುಂಗು

ಗೋಪು ಎಂದರೆ ರುಚಿಕಟ್ಟು ಗೋವೆ ಹುಂಗು.


ಶ್ರೀಪಾದ ಶೆಟ್ಟಿ


(ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಅವರ ಬಗ್ಗೆ ೨೦೦೪ ರಲ್ಲಿ ಬರೆದ ಕವನ)

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

1 Comment


Gopi Honnavar
Gopi Honnavar
Feb 12, 2021

ವ್ಯವಹಾರಿಕವಾದ ಕೊಡುಕೊಳ್ಳುವಿಕೆಯೇ ಇಲ್ಲದ ನಿರ್ವ್ಯಾಜ್ಯ ನಿಮ್ಮ ಪ್ರೀತಿಗೆ ನಮೋನ್ನಮಃ ಶ್ರೀಪಾದ ಶೆಟ್ಟಿ ಸರ್.. 🙏

Like

©Alochane.com 

bottom of page