top of page

ಖಾಲಿ ರಸ್ತೆಗಳು

ಹತ್ತಾರು ಬಾರಿ ಗಾಯಗೊಂಡರೂ

ಮಳೆಗೆ ಮುಚ್ಚಿ ಹೋದರೂ

ಡಾಂಬರು ಬಣ್ಣಕ್ಕೆ ನಿಲ್ಲುತ್ತಿದೆ

ನಿನ್ನ ಜೊತೆಯಲ್ಲೇ

ಮತ್ತೆ ಓಡುತ್ತಿದೆ


ಬಿದ್ದ ಗಾಯ,ಲೆಕ್ಕವಿಲ್ಲದಷ್ಟು ಸಾವು

ನೋವಿನ ಆಘಾತ ಕಂಡರೂ

ನನ್ನ ಪಕ್ಕ ಕುಳಿತು ನಿತ್ಯ ಹೂ ಮಾರುವ

ಬಡ ಅಜ್ಜಿಯ ಪ್ರಾಮಾಣಿಕ ಬದುಕು ಕಂಡು

ನಿನ್ನ ಜೊತೆಯಲ್ಲೇ

ಮತ್ತೆ ಓಡುತ್ತಿದೆ


ಶ್ರೀಮಂತ ಹೀಲ್ಡ ಶೂಗಳು

ಕಣ್ಣು ಕುಕ್ಕುವುದಕ್ಕಿಂತ

ಹರಿದ ಚಪ್ಪಲಿಯೊಳಗೆ ಹೊಕ್ಕಿದ

ಗಾಜಿನ ಚೂರಿನ ಆ ಪಾದಗಳ ಕಂಡು

ಮರುಗುತ್ತಾ

ನಿನ್ನ ಜೊತೆಯಲ್ಲೇ

ಮತ್ತೆ ಓಡುತ್ತಿದೆ



ಮದುವೆಯ ದಿಬ್ಬಣಕ್ಕೆ

ಮರಣದ ಯಾತ್ರೆಗೆ

ಎರಡಕ್ಕೂ ಸಾಕ್ಷಿಯಾಗಿದ್ದೇನೆ

ನಡುವಿನ ಆಟದಲ್ಲಿ ಪ್ರೇಕ್ಷಕನಂತೆ

ನಿನ್ನ ಜೊತೆಯಲ್ಲಿ

ಮತ್ತೆ ಓಡುತ್ತಿದೆ


ಈಗ ಕಾಣೆಯಾದ

ನಿನ್ನ ಹೆಜ್ಜೆಗಳು ಹುಡುಕುವಾಗ

ಚಿತೆಗಳ ಉರಿ ನೋಡಿ ಬೆವರಿದ್ದೇನೆ.

ಓಡಲಾಗದೆ ರಾತ್ರಿಯಂತೆ ಹಗಲು

ಸಹ ನನ್ನ ಜೊತೆ ನಿಶಬ್ಧದಲ್ಲಿ

ವಿಶ್ರಾಂತಿಸುತ್ತಿದೆ



ಎಂ.ಜಿ.ತಿಲೋತ್ತಮೆ

ಭಟ್ಕಳ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page