top of page

ಕ್ಷಮಿಸಲಾಗದು

ಹೇ ನಿಷ್ಕರುಣಿ ನಿರ್ಗುಣಿ

ಕರುಣೆಯಿಲ್ಲದ ನಿರ್ದಯಿ ಸಿಂಹಿಣಿ

ಸಾವು ಬರಲೆಂದು

ದಿನವೂ ಹಂಬಲಿಸುವವರ

ಮೇಲಿಲ್ಲ ನಿನ್ನ ಕರುಣ

ಇನ್ನೂ ಬಾಳಿ ಬದುಕಬೇಕಾದ

ಮುಗ್ಧ ಜೀವಗಳ ಸಂಚು ಹಾಕಿ

ಪ್ರಾಣ ಹೀರಿ ಹೊತ್ತೊಯ್ಯುವ

ನಿನ್ನ ಭಯಾನಕ ಪರಿ

ಸಹಿಸಲಾಗದು ನಿನ್ನ ಕ್ಷಮಿಸಲಾಗದು

ಯಾಕೆ ನಿನಗೆ ಯಾರ ಯಾರ

ಮೇಲೊ ಕಾಕ ದೃಷ್ಟಿ..?

ಒಂದು ಸಣ್ಣ ಸುಳಿವೂ

ನೀಡದೆ ಕಸಿದುಕೊಳ್ಳುವೆಯಲ್ಲ

ಮೊಲೆಯನುಂಬ ಕಂದಮ್ಮಗಳ ತಾಯ್ಗಳ

ಇನ್ನೂ ಬಾಳಿ ಬದುಕಿ

ಎಲ್ಲರಿಗೂ ಬೇಕಾದವರ

ಜೀವಕ್ಕೆ ಜೀವವಾಗಿ ಅರಿತು

ಬೆರೆತ ಸತಿ ಪತಿಗಳಲ್ಲೊಬ್ಬರ

ಇಳಿ ವಯದಲ್ಲಿ ಊರುಗೋಲಿನಂತೆ

ಆಸರೆಯಾಗಿ ನಿಂತವರ

ಪಾಪ ಪುಣ್ಯ ಎಲ್ಲ ಕಂತೆ

ಪಾಪಿಗಳಿಗಲ್ಲಿ ನಿಶ್ಚಿಂತೆ

ಮುಗ್ಧ ಮಾನವಂತರಿಲ್ಲಿ

ನಿನ್ನ ತೋಳ ತೆಕ್ಕೆಯಲ್ಲಿ

ನಿನಗಿಲ್ಲ ಯಾರ ಮೇಲೂ

ದಯೆ, ಪ್ರೀತಿ, ಕರುಣ

ನಿನ್ನ ಹೆಸರೆ ಅಲ್ಲವೆ ಮರಣ

ನಿನಗೆ ಎಳೆದೊಯ್ಯಲು

ಕಾರಣ ಬೇಕೆಂದಿಲ್ಲ

ಬೇಕು ಒಂದು ನೆಪ

ಇನ್ನು ಸಾಕು ನಿಲಿಸು

ನಿನ್ನ ಕರುಣೆಯಿಲ್ಲದ ಕೃತ್ಯವ

ಕೃಪೆ ಮಾಡಿ ದಯೆ ತೋರು

ಉಳಿಸು ಎಳೆಯ ಜೀವವ.


ಸುಧಾ ಹಡಿನಬಾಳ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page