top of page

ಕೊನೆ ಪುಟದಲ್ಲಿ ಗೀಚಿದ್ದು


ಬೇಗ ನೆನಪಾಗಬಹುದೆಂದು ಎಲ್ಲಾ 

ಮೊದಲುಗಳನ್ನ ಕೊನೆ ಪುಟದಲ್ಲಿ ಬರೆಯುವ 

ಗೀಳು.ಹುಡುಕಿದರೆ ಸಿಗಬಹುದು ಅಪೂರ್ಣ 

ಭಾವಪೂರ ಕವಿತೆಗಳು,ಎಲ್ಲೋ ಓದಿ ಮನಸಿಗೆ 

ನಾಟಿದ ಉಕ್ತಿಗಳು,


ನೆನಪಿಸಿಕೊಂಡು 

ಕಂಠಪಾಠ ಮಾಡಿದ ಸ್ವರಗಳ ಮಿಳಿತಗಳನು,

ಅನೇಕ ಸಲ ಮಾಡಿದ ತನ್ನದೇ ರುಜುಗಳನು,

ಜನ್ಮ ನಾಮ ನಕ್ಷತ್ರಗಳ ಪುರವಣಿಗಳನು,


ಆತ್ಮೀಯರ ನೆನೆದು ಅರ್ಧ ಬರೆದು 

ಮುಂದುವರಿಸಲಾಗದೆ ನಿಲ್ಲಿಸಿದ ಹಲವಾರು 

ಕವಿತೆಗಳ,ಅತಿಯಾಗಿ ಕಾಡುವ 

ಭಾವಗೀತೆಗಳ ಮರೆಯಲಾಗದಕ್ಕೆ.


ಕಥೆಗೆ ಕವಿತೆಗಳಿಗೆ ಓದುವಾಗ ಸಿಕ್ಕ ಒಳ್ಳೆ ಶೀರ್ಷಿಕೆಗಳನು,

ಕಡೆಯದಾಗಿ ಕಲಿಯಲೊರಟ ಇಷ್ಟದ ಭಾಷಾ

ಪ್ರಯೋಗಗಳನು,ಸಂಪರ್ಕಕ್ಕೆ ಬರುವಂತೆಯೂ 

ಬಾರದಂತೆಯು ತೋರುವ ಕೆಲವಾರು ವಿಳಾಸಗಳನು.


ಲಕ್ಷ್ಮೀ ದಾವಣಗೆರೆ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page