top of page

ಕಣಿ ಮತ್ತು ಉತ್ತರ


ಕಣಿ ಹೇಳಬಲ್ಲರು ಇವರು

ಉತ್ತರವನೂ.

ಅವರೇ ಕಟ್ಟಿದ್ದೇನಲ್ಲವಾದರೂ

ಕೇಳಿದ್ದು ಬಲ್ಲರಷ್ಟೇ-ಕಣಿ,

ಹೇಳಬಲ್ಲವರು.

ಒಂದಕೊಂದೇ ಉತ್ತರ ಹೇಳಿಕೊಟ್ಟರು:ಕಣಿ ಅಂದವರು,

ಅದರಾಚೆ ಕೇಳಿದವರು

ಮತ್ತೊಂದು ಉತ್ತರಕೆ

ಹುಡುಕಲೇ ಇಲ್ಲ!

ಹುಡುಕಲೇ ಇಲ್ಲ ಉತ್ತರವ,

ಬಾಳಿನ ಕಣಿಗೆ,

ಬದಲಾಗಬೇಕೆಂಬ ಬಯಕೆ ಹೊತ್ತೇ ಇಹರಿನ್ನು

ಶೋಧಿಸುತ್ತಲೇ ಇಹರಿನ್ನೂ

ಕಣಿಗೆಂಟು ಪರಿಹಾರ

ಹೊಳೆವುದೆಂದು!

ಯಾರ ಮೆದುಳಿನಲವಿತು

ಕುಳಿತಿಹುದೊ ಏನೋ?

ಉತ್ತರ,ಅದರದೇ ಕಾತರ!!



*ಗಣಪತಿ ಗೌಡ, ಹೊನ್ನಳ್ಳಿ ಅಂಕೋಲಾ

ಕವಿ ಗಣಪತಿ ಗೌಡ ಹೊನ್ನಳ್ಳಿ ಅವರ 'ಕಣಿ ಮತ್ತು ಉತ್ತರ' ಕವನ ನಿಮ್ಮ ಓದಿಗಾಗಿ. ಸಂಪಾದಕ

 
 
 

Recent Posts

See All
ದೀಪಾವಸಾನ

ಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---

 
 
 
ವ್ಯವಸ್ಥೆ

ಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---

 
 
 

Comments


©Alochane.com 

bottom of page