top of page

ಎಸ್.ಪಿ.ಬಿ ನೆನಪಿಗೆ..

ಅಂದು ಮುಂಜಾನೆ

ಮನೆಯ ಸುತ್ತೆಲ್ಲ ಗಿಡಮರಗಳೂ

ಸಾಮೂಹಿಕ ಜೀವ ತ್ಯಜಿಸಿ

ದ ಹಾಗೆ ತಟಸ್ಥ!

ಚಿಲಿಪಿಲಿಯೇ ಸಾಮೂಹಿಕ ದಹಿಸಿ ಭಸ್ಮವಾದಂತೆ

ಬೆಳಗಿನ ಹಕ್ಕಿಗಳೆಲ್ಲ ಗಾಢ ಮೌನ!

ದಢಕ್ಕನೆ ಆಕಾಶ ಕವಿದ ಅಗಾಧ ಕಪ್ಪು!


ಏನಿರಬಹುದು...!

ದಿನ ಏರಿದಂತೆ ಬಂತು -- ಬಂದೇಬಿಟ್ಟಿತು

ಆ...ಸುದ್ದಿ!

ಎಸ್.ಪಿ.ಬಿ --

ಮಲಗೇ ಬಿಟ್ಟರು ಚಿರಶಾಂತಿಯಲಿ...!

ಅಯ್ಯೋ

ಭಗವಂತನೇ...

ಜಗದಾದ್ಯಂತ ಕರ್ಣ-

ರಸಾಯನವನಿಕ್ಕಿ

ನಿರಂತರ ಉಣಬಡಿಸಿದ ಭಾಗ್ಯವಂತ!

ಎಂಥ ಅಂತ್ಯ ವೋ...ದೇವ?


ಗಾನಕಿರೀಟ ಉರುಳಿತು

ಮಣ್ಣಲಿ ಮಣ್ಣಾಯಿತು...

ಜಗದಗಲ ಕಣ್ಣು

ಬಿಕ್ಕಿ ಬಿಕ್ಕಿ ಸುರಿಸಿದೆ ಕಣ್ಣೀರು

ಇನ್ನು ಎಸ್ ಪಿ ಬಿ ನಿಲ್ಲುವರು ನಿರಂತರ

ಕೇಳುಗಿವಿಗಳ ಎದೆಯ ಪಂಜರದಲಿ

...ದೇವಲೋಕದ ಕೋಗಿಲೆಯ ಹಾಗೆ...


ಡಾ. ಅರಕಲಗೂಡು ನೀಲಕಂಠ ಮೂರ್ತಿ.


Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page