ನವುರಾದ ತಂಗಾಳಿ ಹಿತವಾಗಿ ಸೋಕಿ ಕಡಲಲೆಯ ಮೇಲೇರಿ ಬಳಿ ಬಂದಿದೆ ದಂಡೆಯಲಿ ಜತೆ ನಡೆದ ಜೋಡಿ ಪಾದಗಳ ಸ್ಮೃತಿ ಗಂಧ ಘಮ್ಮೆಂದು ಮುದ ತಂದಿದೆ ||1||
ಹಾಯಿ ಬಿಚ್ಚಿದ ಮನದ ಹಡಗು ನೆನಪುಗಳ ಅಲೆ ಮೇಲೆ ತೇಲಾಡಿದೆ ಪಡುವಣದ ರಂಗೆಲ್ಲಾ ಒಲವಿನರಮನೆಯಲ್ಲಿ ರಂಗೇರಿ ಮಧುಚಂದ್ರ ತುಳುಕಾಡಿದೆ ||2||
ಎಲೆ ಮರೆಯಲಿ ಜೋಡಿ ಹಕ್ಕಿ ಪಿಸು ನುಡಿದು ಬೆಚ್ಚನೆಯ ಗರಿಯೊಳಗೆ ರಮಿಸುತ್ತಿವೆ ಬೆಳದಿಂಗಳು ನಸು ನಾಚಿ ಮಧು ಬನದ ತುಂಬೆಲ್ಲಾ
ಕಳ್ಳ ಹೆಜ್ಜೆಯನಿಟ್ಟು ಸರಿಯುತ್ತಿದೆ. ||3||
- ಬಾಲಕೃಷ್ಣ ದೇವನಮನೆ, ಬೆಳಂಬಾರ
Σχόλια