top of page

ಆವರಣದ ಜೀವರತ್ನ ಹೂಗಳು



ಆ ಮಾಮರದಂತ ಆವರಣದಲ್ಲಿ

ಹತ್ತಾರು ಹೊಸ ಹೂಗಳು ಕಮಲಗಳಂತೆ

ಬಿರಿದಿದ್ದವು, ಅಲ್ಲೂ ಕೋಗಿಲೆಯೆಾಂದು

ಕೋಮಲ ಗಾಂಧಾರದಲ್ಲಿ ಸ್ವರ ಹೊರಡಿಸುತ್ತಿತ್ತು.


ಮಳೆಯ ತರು ಹೂವಿನ ಮೇಲೆ

ಹನಿಗಳು ಪನ್ನೀರಿನ ಹಾಗೆ ಕುಳಿತ್ತಿದ್ದವು,

ದೇವಲೋಕದಿಂದ ಜಾಗ ಮಾಡಿಕೊಂಡ

ಸ್ವರ್ಗದಿಂದ ಸೀದ ಜಾರಿ ಹನಿಹನಿಯಾಗಿ

ಅವುಗಳ ಮೇಲೆ ಮುತ್ತಿನಂತೆ ಕುಳಿತಂತೆ.


ಮಳೆಗೆ ಮಣ್ಣಿನ ಗುಣ ಹೆಚ್ಚು

ಇಡೀ ರಾತ್ರಿ ಸುರಿದ ಜಿಬ್ಬು ಮಳೆಗೆ

ಉಬ್ಬಿದ ಹಾಗೆ ಭೂಮಿ, ರಾತ್ರಿಯೆಲ್ಲ

ನೆನೆದುಕೊಂಡು ಬೆಳಗ್ಗೆ ಅರಳಿತ್ತು ಸೊಂಪಾಗಿ.


ಬಿಳಿ ಹೂಗಳನ್ನು ಬರುವ ತಿಂಗಳಿಗೆ

ಅರಳುವವಿದ್ದವು, ಕೆಂಪು ಮಲ್ಲಿಗೆ ವಸಂತದಲ್ಲಿ

ರಂಜೆ, ಮೇ ಹೂಗಳ ಜೊತೆ ಅರಳಿ

ಒಂದೊಂದೂ ಹೂಗೊಂಚಲು ಬಿಡುತ್ತಿತ್ತು.

ಕಣಗಿಲೆಗೆ ಸುಗ್ಗಿ ಪುನರ್ವಸುವನು

ಸುರಿಸಿಕೊಂಡು ಶ್ರಾವಣ ಸಂಭ್ರಮದ

ಮಳೆ ತೀರ್ಥಪಡೆದು ಪಂಚಮಿಯ

ಹಿಂದೆ, ಆನಂತರ ನಗು ತಿಳಿಸುವ ಹೂಬಿಡುವಂತೆ.


ಲಕ್ಷ್ಮಿ ದಾವಣಗೆರೆ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page