top of page

ಆಲ ವಿಶಾಲ

Updated: Oct 17, 2020

ಭಾವಗಳ ಉಕ್ಜಂದವೆ ಹಾಗೆ

ಮೂಲಕಾವೇರಿಯಲ್ಲಿ ನಿಗದಿಯಾದ

ಸಮಯದಲ್ಲಿ ಕುಂಡದಲ್ಲಿ

ಕಾಶಿ ಭಾಗೀರಥಿಯು ಉಕ್ಕಿ

ಅಲ್ಲಿಯೆ ಸೊಕ್ಕಿ ಪುಷ್ಕರಣಿಗೆ

ಚಿಮ್ಮಿ ಎಲ್ಲರನ್ನು ಭಕ್ತಿ

ಭಾವದೊಳು ತೋಯಿಸಿ

ಮೀಯಿಸಿದಂತೆ ಅಚ್ಚರಿ

ತೀರ್ತೋದ್ಭವದ ಪರಿ

ಭವದ ಪರಿಯು ಒಗಟು

ಎಲ್ಲಿಂದ ಬಂದವರೊ ಎಲ್ಲಿಗೆ

ಹೊರಟಿರುವರು ಅವರು


ಗುರಿ ತಲುಪುವರೊ ಹಾದಿಯಲೆ

ಎಲ್ಲ ಕೊಟ್ಟು ಬಿಟ್ಟು ನಡೆವರೊ

ಮರಳಿ ಬಂದವರಿಲ್ಲ ವರದಿಯ

ತಂದವರಿಲ್ಲ ಅಂತೆ ಕಂತೆಗಳ

ಸಂತೆಯಲಿ ಕಾಲ ಕಳೆವವಗೆ

ಕಾಶಿಯಿಂದ ಬಂದ ವಿಶಾಲಾಕ್ಷಿ

ಭಾಗೀರತಿಯನು ಕರೆದು ತಂದೆ


ಯಾವ ಜನ್ಮದ ಕೆಳೆಯೊ

ಕರುಳ ಕುಡಿಯೊ ಅರ್ಥಕ್ಕೆ

ದಕ್ಕದ ಸಾಲುಗಳು ಕವಿತೆ

ಅಂದುಕೊಂಡು ತೆವಳುತ್ತಿರೆ

ಆಗಸದ ಚಿಕ್ಕೆಯೊಂದು ಕಣ್ಣು

ಮಿಟುಕಿಸೆ ನಿನ್ನ ಮುಖ ಭಾವ

ಅರಗಿಸಿಕೊಳ್ಳಲಾರದೆ ಬಿಕ್ಕುಗಳ

ಹೆಕ್ಕುತ್ತಾ ಶಬ್ದಗಳ ಸೆರಗಿನಲಿ

ಮುಖವ ಮುಚ್ಚಿಕೊಂಡೆ ನಾನು

ನೀನು ತಾಯಿ ನಾನು ಮಗು

ಅಳುವ ಕಂದಗೆ ಅಮ್ಮನ ಲಾಲಿ


ನಗು ಅಳುವಿನ ಜೋಕಾಲಿ

ಎನ್ನುತ್ತಾ ತೆವಳುತ್ತಿರುವಾಗ

ಆಗಸದ ಚುಕ್ಕೆಯೊಂದು ಕಣ್ಣು

ಮಿಟುಕಿಸಿದಾಗ ನಿನ್ನ ಮುಖ

ಭಾವವನು ನಾನು

ಅರಗಿಸಿಕೊಳ್ಳಲಾರದೆ ಬಿಕ್ಕುಗಳ

ಹೆಕ್ಕುತ್ತಾ ಶಬ್ದಗಳ ಸೆರಗಿನಲ್ಲಿ

ಮುಖವ ಮುಚ್ಚಿಕೊಂಡೆನೆ ನಾನು


ಶ್ರೀಪಾದ ಶೆಟ್ಟಿ.

22 views0 comments

Comentarios


bottom of page