top of page

ಆರೋಗ್ಯಸೂತ್ರ

ತುರಿಕಜ್ಜಿ ನವೆ

ಬೆಳಗ್ಗಿನಿಂದ ಸಂಜೆ ವರೆಗೆ

ತುರಿಸುತ್ತ ಕೂರುವುದು

ಕೀವು ಬಸಿಯುವುದು

ತುರಿಸುವುದು ರಾತ್ರಿ ಪುನಃ

ನವೆ ಹೊಸ ಜಾಗದಲ್ಲಿ


ಬಹುಶಃ ರಕ್ತ ಕೆಟ್ಟಿದೆ

ತೆಗೆದುಕೊಳ್ಳಬೇಕು ಔಷಧ

ಭೇದಿಗೆ

ಆಮೇಲೆ ಉಪವಾಸ

ಕೂರಬೇಕಾಗಬಹುದು ಮೂರು ದಿನ

ದ್ರವಾಹಾರ ಸೇವಿಸುತ್ತ


ಕುಡಿಯಬೇಕು ಖಾಲಿಹೊಟ್ಟೆಗೆ

ಕಹಿಯೇ ಇರಬಹುದು

ದೇಹಕ್ಕೆ ಒಳ್ಳೆಯದು

ಕಟುಕರೋಹಿಣಿ ಕಷಾಯ


ಶ್ರದ್ಧೆಯಿದ್ದರೆ ಯೋಗವೂ ಒಳಿತು

ಐವತ್ತರ ಮೇಲೆ

ಬಹಳ ಮುಖ್ಯ ಮಾನಸಿಕ ಆರೋಗ್ಯ

ಆಮೇಲೆ ದೈಹಿಕ

ಏಳುವುದು ಕಷ್ಟ

ಮಲಗಿದರೆ


ಏಳುವುದು ಒಳ್ಳೆಯದು ನಿಧಾನ ಬಲಮಗ್ಗುಲಲ್ಲಿ

ಎಡಕ್ಕೆ ಹೃದಯ

ಹೆಚ್ಚು ಒತ್ತಡ ಹಾಕುವುದು ಒಳ್ಳೆಯದಲ್ಲ!


ಪ್ರಾರ್ಥನೆ ಏಕಾಂತಧ್ಯಾನ

ಮತ್ತು ತುಸು ಸಾವಧಾನ

ಮಾಡಿದರೆ ಒಳ್ಳೆಯದು

ನಮಗೆ

ಮತ್ತು ನಮ್ಮ ಹಿತವರಿಗೆ.


-ಡಾ. ವಸಂತಕುಮಾರ ಪೆರ್ಲ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

ความคิดเห็น


©Alochane.com 

bottom of page