ಆರೋಗ್ಯಸೂತ್ರ
- ಆಲೋಚನೆ
- Sep 20, 2021
- 1 min read
ತುರಿಕಜ್ಜಿ ನವೆ
ಬೆಳಗ್ಗಿನಿಂದ ಸಂಜೆ ವರೆಗೆ
ತುರಿಸುತ್ತ ಕೂರುವುದು
ಕೀವು ಬಸಿಯುವುದು
ತುರಿಸುವುದು ರಾತ್ರಿ ಪುನಃ
ನವೆ ಹೊಸ ಜಾಗದಲ್ಲಿ
ಬಹುಶಃ ರಕ್ತ ಕೆಟ್ಟಿದೆ
ತೆಗೆದುಕೊಳ್ಳಬೇಕು ಔಷಧ
ಭೇದಿಗೆ
ಆಮೇಲೆ ಉಪವಾಸ
ಕೂರಬೇಕಾಗಬಹುದು ಮೂರು ದಿನ
ದ್ರವಾಹಾರ ಸೇವಿಸುತ್ತ
ಕುಡಿಯಬೇಕು ಖಾಲಿಹೊಟ್ಟೆಗೆ
ಕಹಿಯೇ ಇರಬಹುದು
ದೇಹಕ್ಕೆ ಒಳ್ಳೆಯದು
ಕಟುಕರೋಹಿಣಿ ಕಷಾಯ
ಶ್ರದ್ಧೆಯಿದ್ದರೆ ಯೋಗವೂ ಒಳಿತು
ಐವತ್ತರ ಮೇಲೆ
ಬಹಳ ಮುಖ್ಯ ಮಾನಸಿಕ ಆರೋಗ್ಯ
ಆಮೇಲೆ ದೈಹಿಕ
ಏಳುವುದು ಕಷ್ಟ
ಮಲಗಿದರೆ
ಏಳುವುದು ಒಳ್ಳೆಯದು ನಿಧಾನ ಬಲಮಗ್ಗುಲಲ್ಲಿ
ಎಡಕ್ಕೆ ಹೃದಯ
ಹೆಚ್ಚು ಒತ್ತಡ ಹಾಕುವುದು ಒಳ್ಳೆಯದಲ್ಲ!
ಪ್ರಾರ್ಥನೆ ಏಕಾಂತಧ್ಯಾನ
ಮತ್ತು ತುಸು ಸಾವಧಾನ
ಮಾಡಿದರೆ ಒಳ್ಳೆಯದು
ನಮಗೆ
ಮತ್ತು ನಮ್ಮ ಹಿತವರಿಗೆ.
-ಡಾ. ವಸಂತಕುಮಾರ ಪೆರ್ಲ
ความคิดเห็น