ಆತಂಕ [ ಕವನ - ಚಿತ್ರಾಲೋಚನೆ -3]
- ಶ್ರೀಪಾದ ಹೆಗಡೆ
- Sep 6, 2020
- 1 min read
Updated: Sep 8, 2020

ನಾನು ಹೇಗಾದರೂ ಬರಬೇಕು ಹೊರಗೆ!
ಅಂದು ಸಿಮೆಂಟಿನ ಕಬಂಧ ಬಾಹುವಿನಲಿ
ಸಿಲುಕಿದ್ದ ನನಗೆ
ನೀರು , ಬೆಳಕು ಕಾಣದೆ ಉಸಿರು ಕಟ್ಟಿದ ಆತಂಕ!
ಇಲ್ಲಿಗೆ ಹೇಗೆ ಬಂದೆ ಎಂಬುದು ಗೊತ್ತಿಲ್ಲ.
ಗಾಳಿಯ ಹೆಗಲೇರಿ ಅರಿವಿಲ್ಲದೆ
ಹಾರಿ ಬಂದು ಸಂದಿಯಲಿ ಬಿದ್ದ ನನಗೆ
ನೆಲಕೆ ಕಾಲೂರಿ ತಲೆ ಎತ್ತಿ
ಹೊರ ಪ್ರಪಂಚ ಕಾಣುವ ಸಹಜ ಹಂಬಲ
ವರುಣದೇವ ಕರುಣೆಯನು ಹನಿಸಿದ
ಸೂರ್ಯದೇವ ಬೆಳಕನುಣಿಸಿದ
ಇದ್ದಕಿದ್ದಂತೆ ಕಣ್ಣು ತೆರೆದೆ
ಆತಂಕದಿಂದ ಹೊರಬಂದೆನೆಂದು
ಸಂತಸದಿ ಅರಳಿ ನಿಂತೆ
ಹಾಗೆಯೆ ಇಣಕಿ ನೋಡಿದೆ
ಸನಿಹದಲಿ ನನ್ನವರು ಯಾರೂ ಕಾಣಲಿಲ್ಲ
ಇದ್ದಕಿದ್ದಂತೆ ಹತ್ತಿರ ಬಂದ
ಮನೆಯ ಯಜಮಾನನ ಕಣ್ಣಿನಲಿ
ಬಿರುಕಿನ ಕಾರಣದ ಶೋಧ
ಗೊತ್ತಿಲ್ಲಾ ಮುಂದೊದು ದಿನ
ಎಸೆದು ಬಿಡುವನೆ ಭೂಮಿ ಮಡಲಿಗೆ
ಮುರಿದು ನನ್ನ ಕತ್ತು!
ಆತಂಕ ಮರಳಿ
ಮನೆ ಮಾಡಿತ್ತು.!

ಧನ್ಯವಾದಗಳು
ಆತಂಕದ ಹಣೆಪಟ್ಟಿಯಲ್ಲಿ ರಚಿಸಿದ ಮಿತ್ರ ದೇವಿದಾಸ್ ಭಟ್ಟರ ಚಿತ್ರಾಲೋಚನೆಯ ಕವನ ಸುಂದರವಾಗಿದೆ. ಈ ಜಗತ್ತಿನ ಪ್ರತಿಯೊಂದು ಕಣವೂ ಒಂದಿಲ್ಲೊಂದು ಆತಂಕದ ಕರಿನೆರಳಲ್ಲಿ ತೊಳಲಾಡುತ್ತದೆ. ಈ ಬಡ ಅರಳಿಯೂ ತನ್ನ ಭವಿಷ್ಯದ ಆತಂಕಕ್ಕೆ ಒಳಗಾಗುವುದು ಅದು ಬೆಳೆದುಕೊಂಡ ಪರಿಸರದಲ್ಲಿ ಸಹಜವಲ್ಲವೇ?...,Suresh Hegde Hubballi