top of page

ಅನಿರೀಕ್ಷಿತ

ಹೋದ

ಹೋದನವ

ಮೇಲೆ

ಹೋದ

ಆಸೆ-ಆಕಾಂಕ್ಷೆ

ಎಲ್ಲ ಕಟ್ಟಿಟ್ಟು

ಇಲ್ಲೇ

ಹೋದ

ಬರಿಗೈಲಿ


ಲಕ್ಷ ಗಳಿಕೆ

ಕೋಟಿ ಗಳಿಕೆ

ಲೆಕ್ಕ ಸಿಗದಷ್ಟು

ಮತ್ತೆ

ದಕ್ಕಲಿಲ್ಲ

ಸಾಯುವಾಗ

ಜೀವ

ಉಳಿಸಲಿಲ್ಲ


ಕೊರೋನಾ ಕೆಂಗಣ್ಣು

ಬಿದ್ದೇಬಿಟ್ಟಿತು

ಸದ್ದಿಲ್ಲದೆ

ವಕ್ಕರಿಸಿತು


ನರಳಿತು ಜೀವ

ಹಂಬಲಿಸಿತು

ಬಂಧು-ಬಾಂಧವರಿಗಾಗಿ

ಬರಲಿಲ್ಲ

ಯಾರೂ


ಆಸೆ ಮಣ್ಣಾಯ್ತು

ಭರವಸೆ ಬೂದಿಯಾಯ್ತು

**""**""****


*ಪ್ರೊ.ವೆಂಕಟೇಶ ಹುಣಶೀಕಟ್ಟಿ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page